ಉದ್ದೇಶ

ಪ್ರತಿಯಬ್ಬರು ಬದುಕುತ್ತಿರುವುದು ಪ್ರೀತಿಯಿಂದ. ಪ್ರತಿದಿನದ ಬದುಕಿನಲ್ಲಿ ನಮ್ಮವರು ಯಾವುದಾದರು ರೀತಿಯಲ್ಲಿ ನಮಗೆ ಪ್ರೀತಿಯನ್ನು ನೀಡಿ, ನಮ್ಮ ಬದುಕು ಸುಖವಾಗಿರಲಿ ಎಂದು ಹರಸುತ್ತಾರೆ. ಆದರೆಎಷ್ಟೋ ಮಕ್ಕಳು ಯಾರೊಬ್ಭರ ಪ್ರೀತಿಯೂ ಇಲ್ಲದೆ ಬೆಳೆಯುತ್ತಾರೆ. ನಾವು ಅವರ ಸ್ಥಾನದಲ್ಲಿ ನಿಂತು ಯೋಚಿಸಿದಾಗ ಅವರ ಭಾವನೆಗಳು ಅರ್ಥವಾಗುತ್ತದೆ. ಇಂಥಹಮಕ್ಕಳಿಗೆ ಪ್ರೀತಿಯಿಂದ ಮಾತನಾಡಿಸಿ, ಸ್ವಲ್ಪ ಕಾಲ ಜೊತೆಯಲ್ಲಿದ್ದು, ನೀವು ನಮ್ಮಲ್ಲಿ ಒಬ್ಬರು ಎಂಬ ಭಾವನೆ ಮೂಡಿಸಿ, ನಮಗೆ ಆದಷ್ಟು ಸಹಾಯ ಮಾಡುವುದೇ ನಮ್ಮ "ಓ ನನ್ನ ಚೇತನಾ" ಉದ್ಧೇಶವಾಗಿದೆ.

ನಾವು ಈಗಾಗಲೇ ಹೋಗಿಬಂದ ಸಂಸ್ಥೆಗಳ ವಿವರ ಮತ್ತು ಅನಿಸಿಕೆಗಳನ್ನು ವೆಬ್-ಸೈಟ್ ನಲ್ಲಿ ಕೊಟ್ಟಿರುತ್ತೇವೆ. ನಿಮಲ್ಲಿ ಯಾರಿಗಾದರೂ ಆಸಕ್ತಿಯಿದಲ್ಲಿ ನಾವು ಕೊಟ್ಟಿರುವ ಸಂಸ್ಥೆಗಳಿಗೆ ಭೇಟಿನೀಡಬಹುದು. ನೀವು ಇಂಥಹ ಬೇರೆ ಸಂಸ್ಥೆಗೆ ಹೋಗಿ ಬಂದಲ್ಲಿ ಅದರ ವಿಳಾಸ ಮತ್ತು ವಿವರಗಳನ್ನು ನಮಗೆ ಕಳುಹಿಸಿ, ನಮ್ಮ ಉದ್ದೇಶವನ್ನು ಪೂರ್ಣಗೊಳಿಸಲು ಸಹಕರಿಸಿ.

- ಓ ನನ್ನ ಚೇತನಾ

|| ಸರ್ವೇ ಜನ: ಸುಖಿನೋಭವಂತು ||